ದಕ್ಷ ಪೋಲೀಸ್ ಅಧಿಕಾರಿ ಶ್ರೀ ಗೋಪಿಯವರನ್ನು ಕುರಿತು ಒಂದಿಷ್ಟು ಮಾತು
ಪೋಲೀಸ್ ಎಂಬ ಪದವೆ ಒಂದು ಗಡುಸಾದ ವಾಕ್ಯ , ಆರಕ್ಷಕ ರು ನಮ್ಮೆಲ್ಲರ ನೆಮ್ಮದಿಯ ಹೊಣೆಗಾರಿಕೆ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು ಕಾರಣ ಇಷ್ಟೆ, ಇಂದು ನಾವೆಲ್ಲರೂ ನಮ್ಮ ಮನೆಯಲ್ಲಿ ಯಾವುದೇ ಇಲ್ಲದೆ ಭಯವಿಲ್ಲದೆ ನಿದ್ರಿಸುತ್ತಿದ್ದೇವೆ ಎಂದರೆ ಕಾರಣ ಹಗಲಿರುಳೆನ್ನದೆ ನಮ್ಮನ್ನು ಕಾಯುತ್ತಿರುವ ಆರಕ್ಷಕ ರು, ಈ ನಮ್ಮ ಆರಕ್ಷಕ ರು ಅವರ ಸಂಸಾರದ ಜವಾಬ್ದಾರಿಗಿಂತ ನಮ್ಮಗಳ ರಕ್ಷಣೆಯ ಜವಾಬ್ದಾರಿಯನ್ನು ಅವರ ಹೆಗಲ ಮೇಲೆ ಹಾಕಿಕೊಂಡು ನಮ್ಮನ್ನು ಕಾಯುತ್ತಾರೆ ರಾತ್ರಿ ನಾವು ಮಲಗಿದರೆ ಆರಕ್ಷಕ ರು ನಮಗಾಗಿ ಎಚ್ಚರವಾಗಿರುತ್ತಾರೆ, ಇಂತಹ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷ ಹಾಗೂ ಧೀಮಂತ ಪೋಲೀಸ್ ಅಧಿಕಾರಿಯಾದ ಸಕಲೇಶಪುರ ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಶ್ರೀಯುತ ಗೋಪಿಯವರನ್ನು ತಮ್ಮೆಲ್ಲರಿಗೂ ಒಂದಿಷ್ಟು ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ನಮ್ಮದು. ಸಕಲೇಶಪುರ ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಶ್ರೀಯುತ ಗೋಪಿ ಹುಟ್ಟಿದ್ದು ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದಲ್ಲಿ ಶ್ರೀಯುತ ರಾಜನಾಯ್ಕ ಮತ್ತು ಶ್ರೀಮತಿ ಲಲಿತ ಬಾಯಿಯವರ ಮೊದಲ ಮಗನಾಗಿ ಜನಿಸಿದ ಇವರು ಒಂದು ತುಂಬಾ ಬಡ ಕುಟುಂಬದಲ್ಲಿ ಬೆಳೆದು ಬಾಲ್ಯದಲ್ಲಿಯೇ ದೇಶ ಪ್ರೇಮವನ್ನು ಮೈ ಗೊಡಿಸಿಕೊಂಡು ಬೆಳೆದರು , ದೇಶ ಸೇವೆಯನ್ನು ಮಾಡಬೇಕು ಎಂಬ ಅಂಬಲವನ್ನು ಹೊಂದಿದ್ದ ಶ್ರೀಯುತರು ಭಾರತೀಯ ಸೇನೆಯನ್ನು ಸೇರಿ ೧೫ ವರ