ಸರ್ಕಾರಕ್ಕೆ ಕಾಣದ ಬಡವರ ಗೋಳು ! ಮನೆಯ ಮಾಲೀಕರಿಗೆ ಚೆಲ್ಲಾಟ ಬಾಡಿಗೆದಾರರಿಗೆ ಪ್ರಾಣ ಸಂಕಟ
ಕೊರೊನ ಮಹಾಮಾರಿಯ ದಾಳಿಯಿಂದ ಇಂದು ಜನತೆ ತ್ತತ್ತರಿಸಿ ಹೋಗಿದೆ , ಈ ಮಾರಿ ಯಾವಾಗ, ಯಾರಿಂದ, ಹೇಗೆ ಬಂದು ಹೊಕ್ಕರಿಸುತ್ತದೆ ಎಂಬುದೇ ತಿಳಿಯುತ್ತಿಲ್ಲ. ಇದನ್ನು ತಪ್ಪಿಸಲು ನಮ್ಮ ಘನ ಸರ್ಕಾರ ಈಗಾಗಲೇ ಇಡೀ ದೇಶವನ್ನೇ ಸರಿ ಸುಮಾರು 40 ದಿನಗಳ ಕಾಲ ಲಾಕ್ ಡೌನ್ ಮಾಡಿತ್ತು , ಹಾಗೂ ಎಲ್ಲರು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿತ್ತು ಇದರ ಪರಿಣಾಮ ದುಡಿಮೆಯಿಲ್ಲದ ಜನರ ಜೀವನ ವ್ಯವಸ್ಥೆ ಸಂಪೂರ್ಣವಾಗಿ ಏರುಪೇರಾಗಿ ಹೋಗಿತ್ತು. ಇಲ್ಲಿ ಹಣ ವಿದ್ದವನು ಹೇಗೂ ಈ ಸಮಸ್ಯೆಯಿಂದ ಪಾರಾಗಿದ್ದಾನೆ ಆದರೆ ಇಲ್ಲಿ ನಾವು ಯೋಚಿಸಬೇಕಾಗಿರುವುದು ಮಧ್ಯಮವರ್ಗದ ಮತ್ತು ಕೊಲಿ ಮಾಡಿ ಬದುಕಬೇಕಾಗಿರುವ ವರ್ಗದ ಬಗ್ಗೆ. ಇದರಲ್ಲಿ ಸರಿ ಸುಮಾರು 50ರಿಂದ 60 ರಷ್ಟು ಜನ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ, ತಮ್ಮ ಪುಟ್ಟ ಬದುಕನ್ನು ಕಟ್ಟಕೊಳ್ಳುವ ಕನಸು ಕಂಡಿರುವ ಇವರು ಈ ಕೊರೊನ ಮಹಾಮಾರಿಯ ದಾಳಿಯಿಂದ ಇಂದು ನಲುಗಿ ಹೋಗಿದ್ದಾರೆ ತಮ್ಮ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಇವರಿಗೆ ತಾವು ಖರೀದಿಸಿದ ಯಾವುದೊ ಒಂದು ಗೃಹ ಬಳೆಕೆಯ ವಸ್ತುವಿನ EMI ಕಟ್ಟಲು ಮನೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದಾರೆ, ಇದನ್ನು ಅರಿತ ನಮ್ಮ ಸರ್ಕಾರ ಮೂರು ತಿಂಗಳು EMI ಕಟ್ಟಲು ಮತ್ತು ಮನೆ ಬಾಡಿಗೆ ಕಟ್ಟಲು ವಿನಾಯತಿ ಕೊಟ್ಟಿದೆ ಆದರೆ ಇದು ಯಾವುದೇ ಲಿಖಿತ ಸುತ್ತೋಲೆ ಇಲ್ಲ. ಇದನ್ನೇ ಮುಂದಿಟ್ಟುಕೊಂಡಿರುವ ಮನೆ ಮಾಲೀಕರು ಈ ನಿಯಮ ಬೆಂಗಳೂ...