ಮಾರನಹಳ್ಳಿ ಗ್ರಾಮದಲ್ಲಿ ನಿರಂತರ ಜ್ಯೋತಿ ಯ ದುರ್ಬಳಕೆ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಮಾರನಹಳ್ಳಿ ಗ್ರಾಮದಲ್ಲಿ  ನಿರಂತರ ಜ್ಯೋತಿ ಯ ದುರ್ಬಳಕೆ  ಕಣ್ಮುಚ್ಚಿ ಕುಳಿತ  ಅಧಿಕಾರಿಗಳು 



ಹಾಸನ ಜಿಲ್ಲೆಯ ಸಾಲಗಾಮೆ ಹೋಬಳಿಯ ಮಾರನಹಳ್ಳಿ ಗ್ರಾಮದಲ್ಲಿ ಆ ಊರಿನ ವಾಟರ್ ಮ್ಯಾನ್  ಕೇಶವೇಗೌಡ  ಸನ್ ಆಫ್ ಬಸವಲಿಂಗೇಗೌಡ ಎಂಬುವವರು ಈ ಗ್ರಾಮಕ್ಕೆ ಕುಡಿಯುವ ನೀರಿನ ಸ್ವಲಭ್ಯಕ್ಕಾಗಿ ನೀಡಿರುವ ನಿರಂತರ ಜ್ಯೋತಿಯ ಲೈನಿಂದ ಅವರ ಜಮೀನಿಗೆ ಸಂಪರ್ಕ ಕಲ್ಪಿಸಿಕೊಂಡು ನೀರು ಹೊಡೆದುಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು ಈ ಗ್ರಾಮದ ವಿಶ್ವನಾಥ್ ಎಂಬುವವರು ಕೇಳಲು ಹೋದಾಗ  ವಾಟರ್ ಮ್ಯಾನ್ ಉಡಾಫೆ ಉತ್ತರವನ್ನು ನೀಡಿರುತ್ತಾರೆ. ಈ ಕುರಿತಾಗಿ ಮೇಲಧಿಕಾರಿಗಳಿಗೆ ದೂರುನೀಡಲಾಗಿದ್ದು ಗೊತ್ತಿದ್ದೂ ಗೊತ್ತಿಲ್ಲ 
 ಎಂಬಂತೆ ಕ್ರಮ ಜರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. 

ಹಾಗಾದರೆ ಒಂದು ಊರಿನಲ್ಲಿ ಈ ತರಹದ ಘಟನೆ ಒಂದು ವರ್ಷದಿಂದ ನೆಡೆಯುತ್ತಿದ್ದರು ಅದಿಕಾರಿಗಳಿಗೆ ಗೊತ್ತಿಲ್ಲವೇ  ? ಎಂದು ಪ್ರಶ್ನಿಸುತ್ತಿದ್ದಾರೆ . ಆದ್ರೆ  ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ . ಮುಂದೆ ಈ ವಾಟರ್ ಮ್ಯಾನ್ ಗೆ ಗ್ರಾಮಪಂಚಾಯತಿಯವರು ಯಾವ ಕ್ರಮ ಕೈಗೊಳ್ಳುತ್ತಾರೆ ,  ಸರ್ಕಾರಕ್ಕೆ ಮೋಸಮಾಡುವ ಇಂತಹ  ನೌಕರರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬಾರದು ಹಾಗೂ ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪತ್ರಿಕೆ ಒತ್ತಾಹಿಸುತ್ತದೆ 

ಇದು ಮಹಾಪಾಪಿಯ ಸುದ್ದಿಜಾಲ 

ಯೋಗೇಶ ಬಿ.  ಜೆ 
ಹಾಸನ ಜಿಲ್ಲಾ ಮುಖ್ಫ್ಯಕಾರ್ಯನಿರ್ವಾಹಕ ಸಂಪಾದಕರು 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ